ಕೇರಳ: ಕೆ.ಆರ್.ಗೌರಿಯಮ್ಮ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸಮಾರಂಭ

Update: 2016-05-22 11:14 GMT

ಅಲಪ್ಪುಝ, ಮೇ 22: ಪಿಣರಾಯಿ ವಿಜಯನ್ ನೇತೃತ್ವದ ಸಚಿವಸಂಪುಟದ ಪ್ರಮಾಣವಚನ ಸಮಾರಂಭಕ್ಕೆ ಕೆ.ಆರ್. ಗೌರಿಯಮ್ಮರನ್ನು ಆಹ್ವಾನಿಸಲಾಗಿದೆ.ಶನಿವಾರ ಸಿಪಿಎಂ ಪೋಲಿಟ್ ಬ್ಯೂರೊ ಸದಸ್ಯರಾದ ಎಂ.ಎ. ಬೇಬಿ ಫೋನ್ ಮಾಡಿ ಗೌರಿಯಮ್ಮರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ.

ಇದಲ್ಲದೆ ಡಾ.ಥಾಮಸ್ ಐಸಾಕ್ ಗೌರಿಯಮ್ಮರ ಮನೆಗೆ ಹೋಗಿ ಪಕ್ಷದ ಅಧಿಕೃತ ಆಹ್ವಾನವನ್ನು ನೀಡಿದ್ದಾರೆ. ಆದಿತ್ಯವಾರ ನಿಯೋಜಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೋನ್ ಮಾಡಿ ಗೌರಿಯಮ್ಮರನ್ನು ಸಮಾರಂಭದಲ್ಲಿ ಉಪಸ್ಥಿತರಿರಬೇಕೆಂದು ವಿನಂತಿಸಿದ್ದಾರೆ. ಕೇರಳದ ಪ್ರಥಮ ಸಚಿವ ಸಂಪುಟದಲ್ಲಿ ಸಚಿವೆಯಾಗಿದ್ದ ಕೆ.ಆರ್ ಗೌರಿಯಮ್ಮರ ಉಪಸ್ಥಿತಿಯಲ್ಲಿ ಪ್ರಮಾಣವಚನ ಸಮಾರಂಭ ನಡೆಯಬೇಕೆಂದು ಆಗ್ರಹವಿದೆ ಎಂದು ಸಿಪಿಎಂ ಮೂಲಗಳು ತಿಳಿಸಿವೆ. ಗೌರಿಯಮ್ಮ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News