ಮುಖ್ಯಮಂತ್ರಿಯ ಭದ್ರತೆಯಲ್ಲಿ ಸಮತೋಲನಕ್ಕೆ ಪೊಲೀಸ್ ನಿರ್ಧಾರ

Update: 2016-05-25 18:08 GMT

ಗುವಾಹಟಿ, ಮೇ 25: ತನ್ನ ಬೆಂಗಾವಲನ್ನು ಕನಿಷ್ಠವಾಗಿರಿಸುವ ಅಸ್ಸಾಂನ ಹೊಸ ಮುಖ್ಯಮಂತ್ರಿ ಸಬರಾನಂದ ಸೊನೊವಾಲ್‌ರ ನಿರ್ಧಾರಕ್ಕೆ ಬೆಂಬಲವಾಗಿ, ಪೊಲೀಸರು ಅವರ ಸೂಚನೆ ಹಾಗೂ ಭದ್ರತೆಯ ಮೂಲ ಸಿದ್ಧಾಂತಗಳ ನಡುವೆ ಸಮತೋಲನವನ್ನು ಸಾಧಿಸಲಿದ್ದಾರೆ.

ಭದ್ರತೆಯ ಜೊತೆ ರಾಜಿ ಮಾಡಿಕೊಳ್ಳದ ಅಥವಾ ಸಾರ್ವಜನಿಕರಿಗೆ ತೊಂದರೆ ನೀಡಿದೆ. ಮುಖ್ಯಮಂತ್ರಿಯ ಸೂಚನೆಯೊಂದಿಗೆ ತಾವು ಸಮತೋಲನ ಕಾಯ್ದುಕೊಳ್ಳಲಿದ್ದೇವೆಂದು ಅಸ್ಸಾಂನ ಪೊಲೀಸ್ ಮಹಾ ನಿರ್ದೇಶಕ ಮುಕೇಶ್ ಸಹಾಯ್, ಇಲ್ಲಿ ನಡೆದ ಸಭೆಯೊಂದರ ನೇಪಥ್ಯದಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಜನರಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿಯ ಬೆಂಗಾವಲನ್ನು ಕನಿಷ್ಠವಾಗಿಸಲು ಹಾಗೂ ಎಲ್ಲ ಕೆಂಪು ಗೂಟದ ಸಂಕೇತಗಳನ್ನು ನಿಲ್ಲಿಸುವಂತೆ ಇಂದು ನಡೆದ ಸಂಪುಟ ಸಭೆಯೊಂದರಲ್ಲಿ ನಿರ್ಧರಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News