ಚಿಕ್ಕೋಡಿ ಜೈಲಿನಿಂದ ಪರಾರಿಯಾಗಿದ್ದ ಇಬ್ಬರು ಕೈದಿಗಳ ಸೆರೆ

Update: 2016-05-30 05:02 GMT

ಬೆಳಗಾವಿ, ಮೇ 30: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ  ಸಬ್‌ ಜೈಲ್‌ನಿಂದ ಪರಾರಿಯಾಗಿದ್ದ ಮೂವರು ವಿಚಾರಾಧೀನ ಕೈದಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ರಾತ್ರಿ ಜೈಲಿನ ಗೋಡೆಯನ್ನು ಕೊರೆದು ಪರಾರಿಯಾಗಿದ್ದ ಕೈದಿಗಳ  ಪೈಕಿ ರಾಜು ಗುಂಜಾಲ್ಕರ್‌ ಮತ್ತು ದೀಪಕ್‌ ಕಾಂಬ್ಳೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅನಿಲ್‌ ಲಾಂಬುಗೊಲ್‌ಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ  ಜೈಲು ಸೇರಿದ್ದ ವಿಚಾರಾಧೀನ ಕೈದಿಗಳು ಪರಾರಿಯಾಗಿದ್ದ ವಿಚಾರ ರವಿವಾರ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News