ಸಮಸ್ತದ ನೂತನ ಅಧ್ಯಕ್ಷರಾಗಿ ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಆಯ್ಕೆ.

Update: 2016-06-01 10:44 GMT

ಚೇಲಾರಿ: ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ನೂತನ ಅಧ್ಯಕ್ಷರಾಗಿ ಕುಮರಂಪುತ್ತೂರು ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಅವರನ್ನು ಆಯ್ಜೆ ಮಾಡಲಾಗಿದೆ. ಇಂದು ನಡೆದ ಸಮಸ್ತ ಕೇಂದ್ರ ಸಮಿತಿಯ ಮುಶಾವರ ಸಭೆಯಲ್ಲಿ ಉಪಾದ್ಯಕ್ಷರಾದ ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದರು.

ಇತ್ತೀಚೆಗೆ ನಿಧನರಾದ ಶೈಖುನಾ ಕೋಯಕುಟ್ಟಿ ಉಸ್ತಾದರಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಶೈಖುನಾ ಎ.ಪಿ. ಮುಹಮ್ಮದ್ ಮುಸ್ಲಿಯಾರರು ಪಟ್ಟಿಕ್ಕಾಡ್ ಜಾಮಿಅಃ ಅರಬಿಕ್ ಕಾಲೇಜಿನ ಪ್ರೊಫೆಸರ್ ಆಗಿಯೂ, ವಿವಿಧ ಮೊಹಲ್ಲಾಗಳ ಖಾಝಿ ಆಗಿಯೂ ಸೇವೆಗೈಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News