ಪಠಾಣ್ಕೋಟ್ ದಾಳಿಯಲ್ಲಿ ಪಾಕ್ ಕೈವಾಡಕ್ಕೆ ಸಾಕ್ಷವಿಲ್ಲ : ಎನ್ಐಎ ಮುಖ್ಯಸ್ಥ
Update: 2016-06-03 17:02 GMT
ಹೊಸದಿಲ್ಲಿ, ಜೂ.3: ಪಠಾಣ್ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ತಾನ ಸರಕಾರ ಅಥವಾ ಏಜೆನ್ಸಿಗಳ ನೇರ ಕೈವಾಡವಿದೆಯೆನ್ನುವುದಕ್ಕೆ ಇಲ್ಲಿಯ ತನಕ ಯಾವ ಸಾಕ್ಷ್ಯವೂ ದೊರೆತಿಲ್ಲ, ಎಂದು ಎನ್ಐಎ ಮಹಾನಿರ್ದೇಶಕ ಶರದ್ ಕುಮಾರ್ ಹೇಳಿದ್ದಾರೆ. ಪಾಕಿಸ್ತಾನ ಸರಕಾರ ಜೈಶೆ ಮುಹಮ್ಮದ್ ಅಥವಾ ಮಸೂದ್ ಅಝರ್ಗೆ ಈ ದಾಳಿ ನಡೆಸಲು ಸಹಾಯ ಮಾಡಿದೆಯೆನ್ನುವುದಕ್ಕೂ ಸಾಕ್ಷ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ದಳ ಭಾರತದಲ್ಲಿ ತನ್ನ ತನಿಖೆ ಮುಗಿಸಿದ್ದು ಇದೀಗ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ತನಿಖೆ ಮುಗಿಸಲು ಅಲ್ಲಿನ ಸರಕಾರದ ಅನುಮತಿಗಾಗಿ ಕಾಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.