ಸಿಪಿಎಂ ಗೆ ಮತ ನೀಡಿದ ಬಿಜೆಪಿ ಶಾಸಕ !

Update: 2016-06-03 18:30 GMT

ತಿರುವನಂತಪುರ, ಜೂ.3: ಕೇರಳ ವಿಧಾನಸಭಾಧ್ಯಕ್ಷರಾಗಿ ಸಿಪಿಎಂನ ಪಿ. ಶ್ರೀರಾಮಕೃಷ್ಣನ್ ಆಯ್ಕೆಯಾಗಿದ್ದಾರೆ. ಏಕೈಕ ಬಿಜೆಪಿ ಶಾಸಕ ಒ. ರಾಜಗೋಪಾಲ್ ಸಿಪಿಎಂ ಅಭ್ಯರ್ಥಿಗೆ ಮತ ನೀಡಿದ್ದಾರೆ.
ಇದೊಂದು ನಿರೀಕ್ಷಿತ ಆಯ್ಕೆಯೇ ಆಗಿದ್ದರೂ, ಇಂದು ಮುಂಜಾನೆ ನಡೆದ ಮತದಾನದಲ್ಲಿ ಶ್ರೀರಾಮಕೃಷ್ಣನ್, ಸಾಮಾನ್ಯ ನಿರೀಕ್ಷೆಗಿಂತ 2 ಮತಗಳನ್ನು ಹೆಚ್ಚು ಗಳಿಸಿದ್ದಾರೆ.
ಅವರು ಯುಡಿಎಫ್‌ನ ಕಾಂಗ್ರೆಸ್ ಪ್ರತಿಸ್ಪರ್ಧಿ ವಿ.ಪಿ. ಸಜೀಂದ್ರನ್‌ರನ್ನು 92-46 ಮತಗಳಿಂದ ಸೋಲಿಸಿದ್ದಾರೆ. ಸಜೀಂದ್ರನ್‌ರಿಗೆ ಯುಡಿಎಫ್‌ನ ಬಲಕ್ಕಿಂತ ಒಂದು ಮತ ಕಡಿಮೆ ದೊರೆತಿದೆ.
ಹಂಗಾಮಿ ಸ್ಪೀಕರ್ ಸಿಪಿಎಂನ ಎಸ್. ಸರ್ಮಾ ಮತ ಚಲಾಯಿಸಿಲ್ಲ. ಸ್ವತಂತ್ರ ಶಾಸಕ ಪಿ.ಸಿ. ಜಾರ್ಜ್, ಯಾರಿಗೂ ಮುದ್ರೆಯೊತ್ತದೆ ಮತಪತ್ರವನ್ನು ಮಡಚಿ ಪೆಟ್ಟಿಗೆಗೆ ಹಾಕಿದ ಕಾರಣ ಅವರ ಮತ ತಿರಸ್ಕೃತವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News