ಒಲಿಂಪಿಕ್ಸ್ ರಾಯಭಾರಿ ಸಚಿನ್ , ರಹ್ಮಾನ್ ಆಯ್ಕೆಯನ್ನು ಪ್ರಶ್ನಿಸಿದ ಸಲ್ಮಾನ್ !

Update: 2016-06-06 15:40 GMT

ಮುಂಬೈ, ಜೂ . 6 : ಒಲಿಂಪಿಕ್ಸ್ ಗೆ ಭಾರತದ ರಾಯಭಾರಿಯಾಗಿ ಆಯ್ಕೆಯಾದ ಮೇಲೆ ಕ್ರೀಡಾಪಟುಗಳು ಹಾಗು ಮಾಧ್ಯಮಗಳಿಂದಲೂ ಟೀಕೆಗೆ ಗುರಿಯಾಗಿದ್ದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸರಿಯಾದ ಸಮಯಕ್ಕೆ ತಿರುಗೇಟು ನೀಡಿದ್ದಾರೆ. 
ತಮ್ಮ ಆಯ್ಕೆಯ ಬಳಿಕ ರಾಯಭಾರಿಗಳಾಗಿ ಆಯ್ಕೆಯಾದ ಸಚಿನ್ ತೆಂಡೂಲ್ಕರ್ ಹಾಗು ಎ. ಆರ್ . ರಹ್ಮಾನ್ ಅವರ ಆಯ್ಕೆಯ ಬಗ್ಗೆ ಹಾಗು ಅದಕ್ಕೆ ಸಿಕ್ಕಿದ ಪ್ರತಿಕ್ರಿಯೆಯ ಬಗ್ಗೆ ಅವರು ಪ್ರಶ್ನಿಸಿದ್ದಾರೆ. 
" ರಹ್ಮಾನ್ ಗೆ ರಾಜ್ಯ ಮಟ್ಟದ ಅಥವ ರಾಷ್ಟ್ರ ಮಟ್ಟದ ಸರ್ಟಿಫಿಕೇಟ್ ನೀಡುತ್ತಾರೆಯೇ ? ಅವರು ಆಯ್ಕೆಯಾಗುವಾಗ ಇಲ್ಲದ ವಿವಾದ ನನ್ನ ಬಗ್ಗೆ ಮಾತ್ರ ಯಾಕೆ ಹುಟ್ಟಿತು ? " ಎಂದು ಸಲ್ಮಾನ್ ಪ್ರಶ್ನಿಸಿದ್ದಾರೆ. ತನ್ನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ ಎಂದು ಹೇಳಿದ್ದಕ್ಕೂ ತಿರುಗೇಟು ನೀಡಿರುವ ಸಲ್ಮಾನ್  " ನಮ್ಮ ದೇಶದಲ್ಲಿ ಇಷ್ಟು ರಾಜಕಾರಣಿಗಳ ಮೇಲೆ ಪ್ರಕರಣಗಳು ನಡೆಯುತ್ತಿವೆ. ಅವರು ತಮ್ಮ ಹುದ್ದೆ ಬಿಟ್ಟರೆ ನಾನೂ ಬಿಡುತ್ತೇನೆ " ಎಂದವರು ಹೇಳಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News