ಜಾಟ್ ಮೀಸಲು ತಡೆ ತೆರವಿಗೆ ಹೈಕೋರ್ಟ್ ನಕಾರ

Update: 2016-06-06 18:09 GMT

ಚಂಡಿಗಡ, ಜೂ.6: ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಜಾಟರು ಹಾಗೂ ಇತರ 5 ಸಮುದಾಯಗಳಿಗೆ ಶೇ.10 ಮೀಸಲಾತಿ ನೀಡಿದ ಖಟ್ಟರ್ ಸರಕಾರದ ಕ್ರಮದ ಮೇಲಿನ ತಡೆಯನ್ನು ತೆರವುಗೊಳಿಸಲು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಅದು ಜೂ.13ಕ್ಕೆ ನಿಗದಿಗೊಳಿಸಿದೆ. ಪ್ರಕರಣವನ್ನು ತಾಂತ್ರಿಕ ನೆಲೆಯಲ್ಲಿ ಮುಂದೂಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಪ್ರಕರಣಕ್ಕೆ ಬಗ್ಗೆ ದಾಖಲಿಸಿರುವ ಅರ್ಜಿಗಳ ಮೇಲೆ ಮರು ಅರ್ಜಿಗಳನ್ನು ದಾಖಲಿಸಲು ಕಾಲಾವಕಾಶ ಕೇಳಿದ ಕಾರಣ ವಿಚಾರಣೆಯನ್ನು ಮುಂದೂಡಲಾಯಿತು. ಎಲ್ಲ ವಾದ-ಪ್ರತಿವಾದಗಳು ಜೂ.10ರೊಳಗೆ ಮುಕ್ತಾಯಗೊಳ್ಳಬೇಕಾಗಿದೆ,
ಜೂ.10ರ ಬಳಿಕ ಪ್ರಕರಣದ ಮುಂದೂಡಿಕೆಯಿಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News