ರಾತ್ರಿಯಲ್ಲಿ ನಟಿ ಮನೆಗೆ ಬಂದ ಎಸ್ಸೈಗೆ ಊರವರಿಂದ ಧರ್ಮದೇಟು!

Update: 2016-06-11 11:08 GMT

ಕೋಲಂಚೇರಿ, ಜೂನ್ 11: ರಾತ್ರಿ ದಾರಾವಾಹಿಯ  ನಟಿಯೋರ್ವರ ಮನೆಗೆ ಬಂದ ಪುತ್ತನ್‌ಕುರಿಶ್ ಎಸ್ಸೈ ವಿರುದ್ಧ ಅನೈತಿಕ ಚಟುವಟಿಕೆ ಆರೋಪಿಸಿ ಊರಿನವರು ಹಲ್ಲೆ ನಡೆಸಿದ್ದಾರೆ. ನಟಿಯ ತಿರುವಾಣಿಯೂರು ವೆಂಕಿಡಯಿ ಮನೆಗೆ ಬಂದಿದ್ದ ಪುತ್ತನ್ ಕುರಿಶ ಎಸ್ಸೈ ಸಜಿಕುಮಾರ್‌ರಿಗೆಊರವರು ಹೊಡೆದಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

    ಪದೇ ಪದೇ ಇಲ್ಲಿಗೆ ಎಸ್ಸೈ ಬಂದು ಹೋಗುತ್ತಿರುವುದನ್ನು ನೋಡಿದ್ದ ಊರವರು ಗುರುವಾರದಂದು ನಟಿಯ ಮನೆಗೆ ಎಸ್ಸೈ ಬಂದಾಗ ಊರವರು ಸುತ್ತುವರಿದಿದ್ದರು. ಎಸ್ಸೈ ಹೊರಬಂದಾಗ ಜನರಗುಂಪು ಹೊಡೆದಿದೆ. ರಾತ್ರೆ ಹನ್ನೆರಡು ಗಂಟೆಗೆ ಪುತ್ತನ್‌ಕುರಿಶ್ ಸರ್ಕಲ್ ಇನ್‌ಸ್ಪೆಕ್ಟರ್ ರೆಜಿಕುನ್ನಿ ಪರಂಬ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರ ತಂಡದೊಂದಿಗೆ ಬಂದು ಎಸ್ಸೈಯವರನ್ನು ಜನರಿಂದ ಬಿಡಿಸಿ ಕೋಲಂಚೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಊರವರು ಹೊಡೆದಿದ್ದಾರೆ ಎಂದು ಆರೋಪಿಸಿ ದಾರಾವಾಹಿ ನಟಿಯ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ವಿವಾದಕ್ಕಾಗಿ ದೂರು ನೀಡಲು ಕೆಲವು ದಿವಸಗಳ ಹಿಂದೆ ನಟಿ ಮತ್ತು ತಾಯಿ ಕೆಲವು ದಿವಸಗಳ ಮುಂಚೆ ಪೊಲೀಸ್ ಠಾಣೆಗೆ ಹೋಗಿದ್ದರು.

ಘಟನೆಯ ಕುರಿತು ವ್ಯಾಪಕ ತನಿಖೆ ನಡೆಸುವುದಕ್ಕಾಗಿ ಮನೆಗೆ ಬಂದದ್ದೆಂದು ಪೊಲೀಸರ ವಿವರಣೆಯಾಗಿದೆ. ಈ ಘಟನೆಯಿಂದ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿದ್ದರಿಂದ ಎಸ್ಸೈ ವಿರುದ್ಧ ಕ್ರಮ ಜರಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಟಿಯ ತಾಯಿ ಹದಿನೈದು ಮಂದಿಯ ವಿರುದ್ಧ ದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News