ಉಡ್ತಾ ಪಂಜಾಬ್ ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಗ್ರೀನ್‌ ಸಿಗ್ನಲ್‌

Update: 2016-06-13 12:36 GMT

ಮುಂಬೈ, ಜೂ.13: ವಿವಿಧ ಕಾರಣಗಳಿಂದ  ಸುದ್ದಿಯಾಗಿರುವ ಶಾಹಿದ್‌ ಕಪೂರ್‌ ಮತ್ತು ಅಲಿಯಾ ಭಟ್‌ ನಟನೆಯ ‘ಉಡ್ತಾ ಪಂಜಾಬ್‌  ಚಿತ್ರದ ಬಿಡುಗಡೆಗೆ ಬಾಂಬೆ ಹೈಕೋರ್ಟ್‌ ಸೋಮವಾರ ಗ್ರೀನ್‌ ಸಿಗ್ನಲ್‌ ನೀಡಿದೆ.
ಕೇಂದ್ರೀಯ ಚಲನಚಿತ್ರ ಸೆನ್ಸಾರ್‌  ಮಂಡಳಿಗೆ  (ಸಿಬಿಎಫ್​ಸಿ) ಚಲನಚಿತ್ರಗಳನ್ನು ಸೆನ್ಸಾರ್ ಮಾಡುವ ಅಧಿಕಾರ ಇಲ್ಲ  ಎಂದು ತೀರ್ಪು ನೀಡಿದ್ದು,ಸಿನಿಮಾದಲ್ಲಿ ಮೂತ್ರ ಮಾಡುವ ದೃಶ್ಯವೊಂದನ್ನು ಮಾತ್ರ ಕಟ್‌ ಮಾಡುವಂತೆ ಬಾಂಬೆ ಹೈಕೋರ್ಟ್ ಚಿತ್ರ ನಿರ್ದೇಶಕರಿಗೆ ಸೂಚಿಸಿದೆ. ಇದರೊಂದಿಗೆ ಸೆನ್ಸಾರ್‌ ಮಂಡಳಿಯ ಸಿಬಿಎಫ್​ಸಿ ಅಧ್ಯಕ್ಷರಾದ ಪಹ್​ಲಾಜ್ ನಿಹಲಾನಿಗೆ ಮುಖಭಂಗವಾಗಿದೆ
ಉಡ್ತಾ ಪಂಜಾಬ್ ಚಿತ್ರದ 13 ದೃಶ್ಯಗಳಿಗೆ  ಕತ್ತರಿ ಹಾಕಿ  ಎ (ವಯಸ್ಕ) ಕೆಟಗೆರಿಯಲ್ಲಿ  ಪ್ರಮಾಣ ಪತ್ರ ನೀಡಿ ಚಿತ್ರ  ಬಿಡುಗಡೆಗೆ ಗ್ರೀನ್‌ ಸಿಗ್ನಲ್‌  ನೀಡಲಾಗಿದೆ ಎಂದು ಸಿಬಿಎಫ್​ಸಿ ಅಧ್ಯಕ್ಷ  ಪಹ್​ಲಾಜ್ ನಿಹಲಾನಿ ಸೋಮವಾರ ಹೇಳಿಕೆ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News