ನಟ ಸಂಸದ ಇನ್ನಸೆಂಟ್ರ ಕ್ಯಾನ್ಸರ್ ಪ್ರತಿರೋಧ ಯೋಜನೆಗೆ ಚಾಲನೆ
ಕೊಡುಂಙಲ್ಲೂರ್,ಜುಲೈ 16: ಸಂಸದ ಮತ್ತು ಮಳೆಯಾಲಂ ಸಿನೆಮಾ ನಟ ಇನ್ನಸೆಂಟ್ರ ಕ್ಯಾನ್ಸರ್ ಪ್ರತಿರೋಧ ಯೋಜನೆಯಾದ ’ಶ್ರದ್ಧ’ ಕೊಡುಂಙಲ್ಲೂರ್ನಲ್ಲಿ ಆರಂಭವಾಗಿದೆ.ಚಾಲಕ್ಕುಡಿ ಕ್ಷೇತ್ರದ ಐದು ಸರಕಾರಿ ತಾಲೂಕಾಸ್ಪತ್ರೆಗಳಲ್ಲಿ ಈ ಯೋಜನೆ ಪ್ರಕಾರ ಅನಮತಿ ನೀಡಲಾದ ಐದು ಮೆಮೆಗ್ರಾಂ ಯುನಿಟ್ಗಳಲ್ಲಿ ಮೊದಲನೆ ಯುನಿಟ್ನ್ನು ಕೊಡುಂಙಲ್ಲೂರ್ನಲ್ಲಿ ಆರಂಭಿಸಲಾಯಿತೆಂದು ವರದಿಯಾಗಿದೆ.
ತನ್ನ ಪತ್ನಿ ಆಲಿಸಾರ ಕ್ಯಾನ್ಸರ್ ಪ್ರತಿರೋಧದ ರೀತಿನೀತಿಗಳನ್ನು ಇನ್ನಸಂಟ್ ಈ ಸಂದರ್ಭದಲ್ಲಿ ಹಾಸ್ಯಭರಿತವಾಗಿ ವಿವರಿಸಿದಾಗ ಸಭೆ ನಗೆಗಡಲಲ್ಲಿ ತೇಲಾಡಿತ್ತು. ಊರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವಂಚನೆ ನಡೆಸುವುದಕ್ಕಿಂತ ಮನುಷ್ಯನ ಆರೋಗ್ಯ ಸಂರಕ್ಷಣೆಗೆ ಸಹಾಯಕವಾದ ಯೋಜನೆಗಳು ಅಗತ್ಯವಿದೆ ಎಂದು ಇನ್ನಸಂಟ್ ಈ ಸಂದರ್ಭದಲ್ಲಿ ಹೇಳಿದರೆಂದು ವರದಿ ತಿಳಿಸಿದೆ.
ಶಾಸಕ ವಿ.ಆರ್. ಸುನೀಲ್ ಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಜಿಲ್ಲಾ ಯೋಜನಾ ಅಧಿಕಾರಿ ಗೀತು ವರದಿ ಸಮರ್ಪಿಸಿದರು. ಗ್ರಾಮ-ಬ್ಲಾಕ್ ಪಂಚಾಯತ್ ಅಧ್ಯಕ್ಷರುಗಳು, ನಗರಸಭಾ ಅಧಿಕಾರಿಗಳು, ವಾರ್ಡ್ ಸದಸ್ಯರುಗಳು, ಅಧಿಕಾರಿಗಳು. ಎಚ್ಎಂಸಿ ಸದಸ್ಯರು, ರಾಜಕೀಯ ಪಕ್ಷದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಮಾತಾಡಿದರು. ನಗರಸಭಾ ಚೇರ್ಮೆನ್ ಸಿ.ಸಿ. ವಿಪಿನ್ ಚಂದ್ರನ್ ಸ್ವಾಗತಿಸಿ ಆಸ್ಪತ್ರೆ ಸುಪರಿಂಟೆಂಡೆಂಟ್ ಡಾ.ಟಿ.ವಿ. ರೋಷ್ ಕೃತಜ್ಞತೆ ಸಲ್ಲಿಸಿದರೆಂದು ವರದಿಯಾಗಿದೆ.