ಬಿಜೆಪಿ ನಾಯಕನನ್ನು ಬಂಧಿಸಲೇಬೇಕು: ಮಾಯಾವತಿ

Update: 2016-07-20 12:03 GMT

ಹೊಸದಿಲ್ಲಿ , ಜು 20: ತಮ್ಮನ್ನು ವೇಶ್ಯೆಗೆ ಹೋಲಿಸಿರುವ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರನ್ನು ತಕ್ಷಣ ಬಂಧಿಸಬೇಕು ಎಂದು ಬಿಎಸ್ಪಿ ನಾಯಕಿ ಮಾಯಾವತಿ ರಾಜ್ಯಸಭೆಯಲ್ಲಿ ಬುಧವಾರ ಆಗ್ರಹಿಸಿದ್ದಾರೆ. ಅವರ ಬಂಧನ ತಡವಾಗಿ ಇದರಿಂದ ಜನರು ಬೀದಿಗಿಳಿದು ಹಿಂಸಾಚಾರ ನಡೆದರೆ ನಾನು ಜವಾಬ್ದಾರಿಯಲ್ಲ ಎಂದೂ ಅವರು ಎಚ್ಚರಿಸಿದ್ದಾರೆ. 

" ಇಂತಹವರು ರಾಜಕೀಯ ಪಕ್ಷದಲ್ಲಿ ಇರಬಾರದು. ಇವತ್ತಿನವರೆಗೆ ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದ ಬಳಸಿಲ್ಲ. ಬಿಜೆಪಿ ನಾಯಕ ನನ್ನ ವಿರುದ್ಧ ಅಲ್ಲ, ತನ್ನದೇ ಸೋದರಿ , ಮಗಳ ಬಗ್ಗೆ ಹೀಗೆ ಹೇಳಿದ್ದಾರೆ. ಏಕೆಂದರೆ ನನ್ನನ್ನು ಇಡೀ ದೇಶವೇ ತನ್ನ ಸೋದರಿ ಎಂದು ಪರಿಗಣಿಸುತ್ತದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News