ಮಾಯಾವತಿ ವಿರುದ್ಧ ಟೀಕೆ : ಉತ್ತರಪ್ರದೇಶ ಬಿಜೆಪಿ ಉಪಾಧ್ಯಕ್ಷನ ಉಚ್ಛಾಟನೆ

Update: 2016-07-20 16:00 GMT

ಹೊಸದಿಲ್ಲಿ, ಜು.20: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದ ಉತ್ತರಪ್ರದೇಶ ಬಿಜೆಪಿ ಉಪಾಧ್ಯಕ್ಷ ದಯಾಶಂಕರ ಸಿಂಗ್‌ರನ್ನು ಪಕ್ಷವು ಎಲ್ಲ ಹುದ್ದೆಗಳಿಂದ ಉಚ್ಚಾಟಿಸಿವೆ.
ಸಿಂಗ್‌ರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಬಿಡುಗಡೆಗೊಳಿಸಲಾಗಿದೆ. ಅಂತಹ ಭಾಷೆ ಉಪಯೋಗಿಸುವವರಿಗೆ ಪಕ್ಷದಲ್ಲಿ ಸ್ಥಾನವಿಲ್ಲವೆಂದು ಉತ್ತರಪ್ರದೇಶ ಬಿಜೆಪಿಯ ಅಧ್ಯಕ್ಷ ಕೇಶವಪ್ರಸಾದ್ ವೌರ್ಯ ಪತ್ರಕರ್ತರಿಗೆ ತಿಳಿಸಿದರು.
ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರಪ್ರದೇಶದಲ್ಲಿ ಬಿಜೆಪಿ, ರಾಜಕೀಯವಾಗಿ ನಿರ್ಣಾಯಕರಾಗಿರುವ ದಲಿತರ ಒಲವು ಗಳಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ಪಕ್ಷದ ನಾಯಕನೊಬ್ಬನ ಈ ರೀತಿಯ ಹೇಳಿಕೆಯಿಂದ ಈ ಪ್ರಯತ್ನಕ್ಕೆ ಹೊಡೆತ ಬೀಳುವ ಸಾಧ್ಯತೆಯಿತ್ತು. ಸಿಂಗ್ ವಿರುದ್ಧ ತುರ್ತು ಕ್ರಮ ಕೈಗೊಂಡುದರಿಂದ ಹಾನಿ ತಡೆಯಲು ಸಾಧ್ಯವಾಗಬಹುದೆಂಬ ಆಶಾವಾದ ಬಿಜೆಪಿಯದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News