ಮಾಯಾವತಿಗೆ ಬೆಂಬಲ ಪ್ರಕಟಿಸಿದ ಜಯಲಲಿತಾ

Update: 2016-07-21 06:55 GMT

 ಚೆನ್ನೈ, ಜುಲೈ 21: ಬಿಎಸ್ಪಿ ಅಧಿನಾಯಕಿ ಮಾಯವತಿಯನ್ನು ವೇಶ್ಯೆಗೆ ಹೋಲಿಸಿದ ಬಿಜೆಪಿ ನಾಯಕ ದಯಾಶಂಕರ್ ಸಿಂಗ್‌ರ ವರ್ತನೆಯನ್ನು ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾ ಕಟುಶಬ್ದಗಳಿಂದ ಖಂಡಿಸಿದ್ದಾರೆಂದು ವರದಿಯಾಗಿದೆ.ದಯಾಶಂಕರ್ ಸಿಂಗ್‌ರನ್ನು ಪಕ್ಷದ ಸ್ಥಾನಗಳಿಂದ ಹೊರಗೆ ಹಾಕಿದರೆ ಸಾಲದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನು ಬಿಜೆಪಿ ವಜಾಮಾಡಬೇಕಿದೆ ಎಂದು ಜಯಲಲಿತಾ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸಮಾಡಬೇಕೆಂದು ಜಯಲಲಿತಾ ಮನವಿ ಮಾಡಿದ್ದಾರೆ.

ಮಾಯಾವತಿಯ ವಿರುದ್ಧ ಹೇಳಿಕೆಯನ್ನು ಬಿಎಸ್ಪಿ ರಾಜಕೀಯ ಅಸ್ತ್ರವಾಗಿ ಬಳಸಲು ಮುಂದಾಗಿದ್ದು ರಾಜ್ಯದಾದ್ಯಂತ ಬಿಎಸ್ಪಿ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News