ಗೋರಕ್ಷಣೆಯ ಹೆಸರಲ್ಲಿ ಮೊದಲು ಮುಸ್ಲಿಮರ ಮೇಲೆ, ಈಗ ದಲಿತರ ಮೇಲೆ ದೌರ್ಜನ್ಯ : ಬಿಜೆಪಿ ವಿರುದ್ಧ ಮಾಯಾವತಿ ವಾಗ್ದಾಳಿ

Update: 2016-07-21 13:36 GMT

ಹೊಸದಿಲ್ಲಿ, ಜು . 21  : ಸಂಸತ್ತಿನಲ್ಲಿ ಸತತ ಎರಡನೇ ದಿನ ವಿಪಕ್ಷಗಳು ಗುಜರಾತ್ ನಲ್ಲಿ ' ಗೋ ರಕ್ಷಕರು ' ದಲಿತರ ವಿರುದ್ಧ ನಡೆಸಿರುವ ದೌರ್ಜನ್ಯದ ಬಗ್ಗೆ ಒಗ್ಗಟ್ಟಾಗಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
ಬಿಎಸ್ಪಿ ನಾಯಕಿ ಮಾಯಾವತಿ ಮಾತನಾಡಿ " ಗೋರಕ್ಷಣೆಯ ಹೆಸರಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಮೊದಲು ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲಾಗುತ್ತಿತ್ತು. ಈಗ ದಲಿತರನ್ನೂ ಬಿಡಲಾಗುತ್ತಿಲ್ಲ. ಇದು ಗುಜರಾತ್ ಮಾತ್ರವಲ್ಲ, ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿ ನಡೆಯುತ್ತಿದೆ " ಎಂದು ಹೇಳಿದರು.
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News