ಮಾಯಾವತಿ ಅವಹೇಳನವನ್ನು ' ಸಮರ್ಥಿಸಿದ' ಐಪಿಎಸ್ ಅಧಿಕಾರಿ

Update: 2016-07-23 11:47 GMT

ಲಕ್ನೋ , ಜು. 23 : ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಮಾಡಿರುವ ಅವಹೇಳನಕಾರಿ ಹೇಳಿಕೆ ಭಾರೀ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಆ ಅವಹೇಳನವನ್ನು ಪರೋಕ್ಷವಾಗಿ ಸಮರ್ಥಿಸಿ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ವಿವಾದಕ್ಕೊಳಗಾಗಿದ್ದಾರೆ. 

ಅಮಿತಾಭ್ ತಮ್ಮ ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ "ಕಯೀ ಲೋಗ್ ಕಯೀ ಬಾರ್ ಗಲತ್ ಢಂಗ್ ಸೆ ಸಹೀ ಬಾತ್ ಕಹ್ ದೇತೇ ಹೈನ್ ತೊ ಹಂಗಾಮ ಮಚ್ ಜಾತಾ ಹೈ " ( ಕೆಲವರು ಸರಿಯಾದ ಮಾತನ್ನು ತಪ್ಪು ಧಾಟಿಯಲ್ಲಿ ಹೇಳಿ ಬಿಟ್ಟರೆ ದೊಡ್ಡ ರಾದ್ಧಾಂತ ಆಗಿ ಬಿಡುತ್ತದೆ ) . 

ಅಲ್ಲಿಗೆ ನಿಲ್ಲದ ಅಮಿತಾಭ್ ಬಿಜೆಪಿ ನಾಯಕನ ಕುಟುಂಬಕ್ಕೆ ತಮ್ಮ ಬೆಂಬಲ ಪ್ರಕಟಿಸಿದರು. 

" ಜಿಸ್ ಪ್ರಕಾರ್ ಆಜ್ ದಯಾಶಂಕರ್ ಕೆ ಪರಿವಾರ ವಾಲೋನ್  ಕೇಲಿಯೇ ಖುಲೇ ಆಮ್ ಅಪಶಬ್ದ್ ಬೋಲೇ ಗಯೇ ಉಸ್ಸೆ ಏಕ್ ಬಾರ್ ಫಿರ್ ಲಗಾ ಕಿ ತಾಖತ್ ಹೊ ತೊ ಸಬ್ ಜಾಯೆಜ್ಹ್ ಹೈ ( ದಯಾಶಂಕರ್ ಅವರ ಕುಟುಂಬದ ಕುರಿತು ಈಗ ಬಳಕೆಯಾಗುತ್ತಿರುವ ಅಪಶಬ್ದಗಳನ್ನು ನೋಡಿದರೆ ಅಧಿಕಾರವಿದ್ದರೆ ಇಲ್ಲಿ ಎಲ್ಲವೂ ಸಾಧ್ಯ) ಎಂದು ಮತ್ತೆ  ಸಾಬೀತಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News