ಕುಡಿಯಬೇಡ ಎಂದ ಪತ್ನಿಯನ್ನು ಚಚ್ಚಿಕೊಂದ ಪತಿರಾಯ!
ಬಾಂದಾ,ಜುಲೈ 24: ಕುಡಿಯದಂತೆ ಅಡ್ಡಿಪಡಿಸಿದ ಪತ್ನಿಯನ್ನು ಪತಿಯೊಬ್ಬ ಕಲ್ಲಿನಿಂದ ಚಚ್ಚಿಕೊಂದ ದಾರುಣ ಘಟನೆ ಉತ್ತರಪ್ರದೇಶದ ಬಾಂದಾ ಜಿಲ್ಲೆಯಿಂದ ವರದಿಯಾಗಿದೆ. ನಲ್ವತ್ತು ರೂಪಾಯಿ ಮೌಲ್ಯದ ಶರಾಬಿನ ಸೀಸೆಯನ್ನು ಪತ್ನಿ ಪುಡಿಗೈದಿದ್ದು ಅವಳ ಕೊಲೆಗೆ ಕಾರಣವಾಗಿತ್ತು ಎಂದು ವರದಿ ತಿಳಿಸಿದೆ.
ಬಾಂದದ ಕೋತವಾಲಿ ಎಂಬ ಹಳ್ಳಿಯಲ್ಲಿ ಕಾಳಿಚರಣ್ ರೈದಾಸ್ ಎಂಬ ಮಧ್ಯವಯಸ್ಕ ವ್ಯಕ್ತಿ ವಿಪರೀತ ಕುಡಿಯುವ ಚಾಳಿಯನ್ನು ಅಂಟಿಸಿಕೊಂಡಿದ್ದ. ಅವನು ಮನೆಯಲ್ಲಿ ಶರಾಬು ಕುಡಿಯುತ್ತಿದ್ದಾಗ ಪತ್ನಿ ಮೀರಾದೇವಿ ಶರಾಬು ಕುಡಿಯಬೇಡ ಎಂದು ಅಡ್ಡಬಂದಿದ್ದಳು. ಆದ್ದರಿಂದ ಪತಿಪತ್ನಿಯರಲ್ಲಿ ಜಗಳ ಆರಂಭವಾಗಿತ್ತು. ಮೀರಾದೇವಿ ಶರಾಬಿನ ಬಾಟ್ಲಿಯನ್ನು ಎಳೆದಾಡಿದಾಗ ಅದು ಕೆಳಗೆ ಬಿದ್ದು ಪುಡಿಯಾಗಿತ್ತು. ಇದಕ್ಕೆ ಕುಪಿತನಾದ ಪತಿಮಹಾಶಯ ಕಲ್ಲನ್ನು ತೆಗೆದು ಅವಳ ತಲೆಗೆ ಹೊಡೆದಿದ್ದು ಅದರಿಂದಾಗಿ ಮೀರಾದೇವಿ ಮೃತಳಾದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯೊಳಗಿನಿಂದ ಗಲಾಟೆ ಕೇಳಿದಾಗ ನೆರೆಯವರು ಪೊಲೀಸರಿಗೆ ಫೋನ್ ತಿಳಿಸಿದ್ದರು. ಪೊಲೀಸರು ಬರುವಷ್ಟರಲ್ಲಿ ಮೀನಾದೇವಿಯನ್ನು ಕಲ್ಲಿನಿಂದ ಚಚ್ಚಿ ಕೊಂದುಹಾಕಿ ಕಾಳಿದಾಸ ಸ್ಥಳದಿಂದ ಪರಾರಿಯಾಗಿದ್ದ ಎಂದು ವರದಿ ತಿಳಿಸಿದೆ. ಶರಾಬು ಕುಡಿದು ಪತ್ನಿಯೊಂದಿಗೆ ಆಗಾಗ ಗಲಾಟೆ ಮಾಡುವುದು ಕಾಳಿದಾಸನ ಅಭ್ಯಾಸವಾಗಿತ್ತು ಎನ್ನಲಾಗಿದೆ. ಆರೋಪಿಯ ಪತ್ತೆಗೆ ವ್ಯಾಪಕ ಬಲೆಬೀಸಿದ್ದು ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.