ದಯಾಶಂಕರ ಸಿಂಗ್ ವಿರುದ್ಧ ಜಾಮೀನುರಹಿತ ವಾರಂಟ್
Update: 2016-07-25 18:25 GMT
ಹೊಸದಿಲ್ಲಿ, ಜು.25: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಉಚ್ಚಾಟಿತ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ವಿರುದ್ಧ ಲಕ್ನೋದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ಜಾಮೀನು ರಹಿತ ಬಂಧನ ವಾರಂಟ್ನ್ನು ಹೊರಡಿಸಿದೆ.ಸಿಂಗ್ ಮಾಯಾವತಿಯವರು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ವಿತರಿಸುವ ವ್ಯವಸ್ಥೆಯನ್ನು ಟೀಕಿಸುವಾಗ ಅವರನ್ನು ವೇಶ್ಯೆಗೆ ಹೋಲಿಸಿದ್ದರು.
ದಯಾಶಂಕರ್ರ ಟೀಕೆ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿತ್ತು. ಮುಜುಗರಗೊಂಡಿದ್ದ ಬಿಜೆಪಿ ಅವರನ್ನು ಪಕ್ಷ ದಿಂದ ಉಚ್ಚಾಟಿಸಿತ್ತು. ಬಿಎಸ್ಪಿಯ ದೂರಿನ ಮೇರೆಗೆ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.