ಕುಪ್ಪಾರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ; ನಾಲ್ವರು ಉಗ್ರರ ಸಾವು
Update: 2016-07-26 08:24 GMT
ಶ್ರೀನಗರ, ಜು.26: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.ಓರ್ವನನ್ನು ಬಂಧಿಸಲಾಗಿದೆ.
ನೌಗಮ್ ವಲಯದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯಿತು. ನಾಲ್ಕು ಮಂದಿ ಉಗ್ರರು ಕೊಲ್ಲಲ್ಪಟ್ಟರು. ಇವರೆಲ್ಲರೂ ವಿದೇಶಿಯರು ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.