ಅರ್ನಬ್ ರ ಕಾರ್ಯಕ್ರಮವನ್ನೇ ಬಂದ್ ಮಾಡಲಿ : ಶೌರಿ ತಿರುಗೇಟು

Update: 2016-08-02 10:10 GMT

ಹೊಸದಿಲ್ಲಿ, ಆ. 2 :  ಕೇಂದ್ರ ಸರಕಾರವನ್ನು ಟೀಕಿಸುವ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಧಾಟಿಯಲ್ಲಿ ಮಾತನಾಡಿರುವ ಟೈಮ್ಸ್ ನೌ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಅವರು ಬಂದ್ ಮಾಡುವುದಿದ್ದರೆ ಮೊದಲು ಅರ್ನಬ್ ರ ಕಾರ್ಯಕ್ರಮವನ್ನೇ ಬಂದ್ ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ. 

" ಮೊದಲನೆಯದಾಗಿ ಸರಕಾರ ಅವರ ಮಾತನ್ನು ಕೇಳಬಾರದು, ಮತ್ತು ನಿಲ್ಲಿಸುವುದಾದರೆ ಅವರ ಪ್ರೋಗ್ರಾಮ್ ಆನ್ನೇ ನಿಲ್ಲಿಸಬೇಕು. ಇದು ಸರಿಯಾದ ವಿಧಾನ ಅಲ್ಲ. ಜನರಿಗೆ ಪತ್ರಿಕೆಗಳು, ಟಿವಿ ಚಾನಲ್ ಗಳು ಪ್ರಚೋದನಕಾರಿ ಯಾಗಿ ಕೆಲಸ ಮಾಡುತ್ತಿವೆ ಎಂದು ಅನಿಸಿದರೆ ಆ ಪತ್ರಿಕೆಗಳನ್ನು ಓದುವುದನ್ನು, ಟಿವಿ ಚಾನಲ್ ನೋಡುವುದನ್ನು ನಿಲ್ಲಿಸಬೇಕು. ಅದನ್ನು ಬಿಟ್ಟು ಬಂದ್ ಮಾಡಿಸುವುದು ಸರಿಯಲ್ಲ " ಎಂದು ಶಾಸ್ತ್ರೀ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News