ಪಾಸ್ ಇದ್ದರೂ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಪ್ರವೇಶಕ್ಕೆ ನಿರಾಕರಣೆ

Update: 2016-08-02 18:18 GMT

ಮುಂಬೈ, ಆ.2: ಅಧಿಕೃತ ಪಾಸ್ ಹೊಂದಿದ್ದರೂ ತನಗೆ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಇಂದಿಲ್ಲಿ ಆಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪರಿಷತ್‌ನಲ್ಲಿ ಪ್ರತ್ಯೇಕ ವಿದರ್ಭ ರಾಜ್ಯ ಕುರಿತು ಚರ್ಚೆಯನ್ನು ವೀಕ್ಷಿಸಲು ತಾನು ಬಯಸಿದ್ದೆ. ತನಗೆ ಮಧ್ಯಾಹ್ನ 12ರಿಂದ 1ಗಂಟೆಯವರೆಗೆ ಸಮಯವನ್ನು ನೀಡಲಾಗಿತ್ತು. ತಾನು 12:20ಕ್ಕೆ ತಲುಪಿದ್ದೆನಾದರೂ ಭದ್ರತಾ ಸಿಬ್ಬಂದಿ ವೃಥಾ ಕಾಲಹರಣ ಮಾಡಿ ನಿಗದಿತ ಸಮಯದಲ್ಲಿ ಪ್ರವೇಶಕ್ಕೆ ತನಗೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದರು.
ಈ ಘಟನೆಯನ್ನು ‘ಪ್ರಜಾಪ್ರಭುತ್ವದ ಅವನತಿ’ ಎಂದು ಬಣ್ಣಿಸಿದ ಅವರು, ಬಿಜೆಪಿ ನೇತೃತ್ವದ ಸರಕಾರವು ಪ್ರಜಾವಿರೋಧಿಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News