ಕೇರಳ:ಜಿಲ್ಲಾಧಿಕಾರಿ ಶೈನಾಮೋಳ್ ಸಹಿತ ಹತ್ತು ಜಿಲ್ಲಾಧಿಕಾರಿಗಳ ವರ್ಗಾವಣೆ
Update: 2016-08-04 07:38 GMT
ತಿರುವನಂತಪುರ,ಆ.4: ಪರವೂರ್ ಸಿಡಿಮದ್ದು ದುರಂತದಲ್ಲಿ ಪೊಲೀಸರನ್ನು ಬಹಿರಂಗವಾಗಿ ಟೀಕಿಸಿದ್ದ ಕೊಲ್ಲಂ ಜಿಲ್ಲಾಧಿಕಾರಿ ಶೈನಾಮೋಳ್ ಸಹಿತ ಹತ್ತು ಮಂದಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಆದೇಶ ಹೊರಬಿದ್ದಿದೆ. ಶೈನಾಮೋಳ್ ಕೊಲ್ಲಂನಿಂದ ಮಲಪ್ಪುರಂಗೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೆ ಇತರ ಜಿಲ್ಲಾಧಿಕಾರಿಗಳು,ತಿರುವನಂತಪುರಂಕ್ಕೆ ಎಸ್.ವೆಂಕಟೇಶ್ಪತಿ, ಕೊಲ್ಲಂಗೆ ಟಿ.ಮಿತ್ರಾ, ಪತ್ತನಂತಿಟ್ಟಕ್ಕೆ ಆರ್. ಗಿರಿಜ, ಅಲಪ್ಪುಝ ವೀಣಾ ಮಾಧವನ್, ಕೋಟ್ಟಯಂ ಸಿ.ಐ.ಲತಾ, ಇಡುಕ್ಕಿ ಜಿ.ಆರ್. ಗೋಕುಲ್. ಎರ್ನಾಕುಲಂಗೆ ಕೆ. ಮುಹಮ್ಮದ್ ವೈ.ಸಫೀರುಲ್ಲ, ತೃಶೂರ್ ಎ.ಕೌಶಿಗನ್, ವಯನಾಡ್ ಬಿ.ಎಸ್.ತಿರುಮೇನಿ, ಕಣ್ಣೂರಿಗೆ ಮೀರ್ ಮುಹಮ್ಮದ್ಅಲಿ, ಕಾಸರಗೋಡಿಗೆ ಜೀವನ್ ಬಾಬು ಇವರಿಗೆ ವರ್ಗಾವಣೆ ಆಗಿದೆ ಎಂದು ವರದಿಯಾಗಿದೆ.