ಅಮಾನತುಗೊಂಡ ಎಐಎಡಿಎಂಕೆ ಎಂಪಿ ಶಶಿಕಲಾ ಪುಷ್ಪ ವಿರುದ್ಧ ಎಫ್ಐಆರ್
Update: 2016-08-10 10:08 GMT
ಹೊಸದಿಲ್ಲಿ, ಆ.10: ಅಮಾನತುಗೊಂಡ ಎಐಎಡಿಎಂಕೆ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶಶಿಕಲಾ ಸಹಾಯಕಿಯು ಶಶಿಕಲಾ, ಆಕೆಯ ಪತಿ, ತಾಯಿ ಮತ್ತು ಮಗನ ವಿರುದ್ಧ ದೌರ್ಜನ್ಯ ನಡೆಸಿರಿವ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ತಿರುನೆಲ್ವೆಲಿ ನಿವಾಸಿ ಎಸ್. ರಾಜೇಶ್ ಎಂಬವರು ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿ 20ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಆರೋಪಿಸಿದ್ದರು.
ಹೊಸದಿಲ್ಲಿಯ ಇಂದಿರಾ ಗಾಂಧಿ ಏರ್ ಪೋರ್ಟ್ ನಲ್ಲಿ ಡಿಎಂಕೆ ಸಂಸದ ತಿರುಚಿ ಎನ್ ಶಿವ ಅವರಿಗೆ ಕೆನ್ನೆಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಆ.1ರಂದು ಶಶಿಕಲಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.