ಅವಳಿ ಜವಳಿ ವಧುಗಳಿಗೆ, ಅವಳಿ ಜವಳಿ ವರರು!

Update: 2016-08-16 10:28 GMT

ಅಂಚ್ಚಾಲುಂಮೂಡ್,ಆ.16: ಅವಳಿ ಸಹೋದರಿಯರಿಗೆ ಜೀವನಸಖರಾಗಿ ಅವಳಿಜವಳಿ ಸಹೋದರರು ಸಿಕ್ಕಿರುವ ಅಪೂರ್ವ ಮದುವೆಯೊಂದು ಕೇರಳದಲ್ಲಿ ನಡೆದಿದೆಎಂದು ವರದಿಯಾಗಿದೆ.

 ತೃಕ್ಕರುವ ಇಂಚ್ವವಿಳ ಟ್ವಿನ್ಸ್ ವಿಲ್ಲಾದ ನಿವೃತ್ತಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಅಬ್ದುಲ್ ಸಲಾಮ್, ಅಬೂಷಾ ದಂಪತಿಯ ಪುತ್ರರಾದ ಅತುಲ್‌ರಾಜ್, ಅರುಣ್‌ರಾಜ್‌ರಿಗೆ ಅವಳಿ ಸಹೋದರರಿಯರು ಜೀವನಸಖಿಗಳಾಗಿ ದೊರಕಿದ್ದಾರೆ.

ಅಂಚ್ವಲ್ ವಡಮಣ್ ಚುರುವಿಳ ಪುತ್ತನ್ ವೀಟ್‌ನ ಸಲಾಹುದ್ದೀನ್ ಶಾನಿಫ ದಂಪತಿಯ ಅವಳಿ ಜವಳಿ ಪುತ್ರಿಯರಾದ ಅಜಿಮಿ, ಬಿಸ್ಮಿ ಯನ್ನು ಅತುಲ್‌ರಾಜ್, ಅರುಣ್‌ರಾಜ್ ವಿವಾಹವಾಗಿದ್ದಾರೆ. ವಧುಗಳಿಬ್ಬರೂ ಬಿಕಾಂ ಪದವೀಧರೆಯರು ಎಂಬುದು ಇನ್ನೊಂದು ವಿಶೇಷವೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News