ಸೌದಿಯಿಂದ ಮರಳಿ ಬರುವ ಕೇರಳಿಗರ ಸಂಪೂರ್ಣ ಪ್ರಯಾಣ ವೆಚ್ಚ ಸರಕಾರ ಭರಿಸಲಿದೆ: ಪಿಣರಾಯಿ ವಿಜಯನ್

Update: 2016-08-18 08:19 GMT

ತಿರುವನಂತಪುರಂ,ಆಗಸ್ಟ್ 18: ಸೌದಿ ಅರೇಬಿಯದಲ್ಲಿ ಉದ್ಯೋಗರಹಿತರಾದವರಿಗೆ ವಿಮಾನದ ಮೂಲಕ ಕೇರಳಕ್ಕೆ ತಲುಪುವವರೆಗಿನ ಎಲ್ಲ ಖರ್ಚುಗಳನ್ನು ಸರಕಾರ ಭರಿಸಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ. ಮುಂಬೈ ಮತ್ತು ದಿಲ್ಲಿಗೆ ಬಂದು ತಲುಪಿರುವವರು ಕೇರಳಕ್ಕೆ ತಲುಪುವವರೆ ಸಂಪೂರ್ಣ ವಿಮಾನ ಪ್ರಯಾಣದ ವೆಚ್ಚವನ್ನು ನೀಡಲು ಮುಖ್ಯಮಂತ್ರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೌದಿ ಅರೇಬಿಯದಿಂದ ಮರಳಿಬರುವವರ ಪ್ರಯಾಣ ವೆಚ್ಚ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸರಕಾರದ ನಿಲುವು ಈ ಹಿಂದೆ ವಿವಾದಾಸ್ಪದವಾಗಿತ್ತು ಎಂದು ವರದಿ ತಿಳಿಸಿದೆ.

  ದಿಲ್ಲಿಗೆ ತಲುಪಿದ ಮೇಲೆ ರೈಲಿನ ಮೂಲಕ ಕೇರಳಕ್ಕೆ ಬರಲಿ ಎಂದು ಸರಕಾರದ ನಿಲುವಾಗಿತ್ತು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸೌದಿಯಿಂದ ಕೇರಳಕ್ಕೆ ಮರಳಿಬರುವವರ ಸಂಪೂರ್ಣ ಖರ್ಚನ್ನು ವಹಿಸಿಕೊಳ್ಳಲು ಸರಕಾರ ಮುಂದೆ ಬಂದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News