ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲೀಯರು ಸಾವು

Update: 2018-01-05 14:36 GMT
ಸಾಂದರ್ಭಿಕ ಚಿತ್ರ

ರಾಯಪುರ, ಜ. 5: ಚತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ ಮೂವರು ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಡುವಾಂಡಿ-ಕವಾಡ್‌ಗಾಂವ್‌ನ ಅರಣ್ಯದಲ್ಲಿ ಭದ್ರತಾ ಪಡೆಯ ಜಂಟಿ ತಂಡ ನಡೆಸಿದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಬೆಳಗ್ಗೆ 7.30ರ ಹೊತ್ತಿಗೆ ನಕ್ಸಲೀಯರನ್ನು ಹತ್ಯೆಗೈಯಲಾಗಿದೆ ಎಂದು ಡಿಐಜಿಪಿ ಸುಂದರ್‌ರಾಜ್ ಹೇಳಿದ್ದಾರೆ. ಇಲ್ಲಿಂದ 450 ಕಿ.ಮೀ. ದೂರದಲ್ಲಿರುವ ಗಂಗಾಲೂರ್‌ನ ದುರ್ಗಮ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೆಸಲ್ಯೂಟ್ ಆ್ಯಕ್ಷನ್‌ಗಿರುವ ಕೇಂದ್ರ ಮೀಸಲು ಪಡೆಯ ಎಲೈಟ್ ಘಟಕ ಕಮಾಂಡೊ ಬೆಟಾಲಿಯನ್ ಹಾಗೂ ಜಿಲ್ಲಾ ಮೀಸಲು ರಕ್ಷಣೆಯ ಸಂಯುಕ್ತ ಪಡೆಗಳು ಭಾಗಿಯಾದ್ದವು. ಇಂದು ಬೆಳಗ್ಗೆ ನಕ್ಸಲೀಯರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಕೂಡಲೇ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿತು ಎಂದು ಡಿಐಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News