ತೀವ್ರಚಳಿಗೆ ನಾಲ್ವರು ಬಲಿ
Update: 2018-01-05 15:48 GMT
ಮುಝಾಫರನಗರ್, ಜ. 5: ಮುಝಾಫರನಗರ್ ಹಾಗೂ ಶಾಮ್ಲಿ ಜಿಲ್ಲೆಯಲ್ಲಿ ತೀವ್ರ ಚಳಿಯಿಂದ ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ತೀವ್ರ ಚಳಿಗೆ ಮಿರಾನ್ಪುರ ಪಟ್ಟಣದ ಖೇರಟಿ (70) ಹಾಗೂ ಪ್ರತಿಕೂಲ ಹವಾಮಾನಕ್ಕೆ ಜನ್ಸಥ್ ಪಟ್ಟಣದ ಕುಲದೀಪ್ (40) ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಕೇಂದ್ರ ಕಚೇರಿಯ ವರದಿ ತಿಳಿಸಿದೆ.
ತೀವ್ರ ಚಳಿಯ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಹಾರಿಘರ್ ಕೂಲಿ ಕಾರ್ಮಿಕ (50) ಬುದ್ಧ ಸಿಂಗ್ ಸೈನಿ ಹಾಗೂ ಶಾಮ್ಲಿ ರೈಲು ನಿಲ್ದಾಣದ ಸಮೀಪದ ಪಾಪನ್ (48) ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.