ಅಂಗವಿಕಲ ಬಾಲಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು

Update: 2018-01-09 15:08 GMT

ಭೋಪಾಲ್, ಜ. 9: ಹದಿನೇಳು ವರ್ಷದ ಅಂಗವಿಕಲ ಬಾಲಕಿಯನ್ನು ಆಕೆಯ ತಂದೆ ಹಾಗೂ ಮಾವ ಸೇರಿ ದಹಿಸಿದ ಅಮಾನವೀಯ ಘಟನೆ ಇಲ್ಲಿ ವರದಿಯಾಗಿದೆ. ಘಟನೆಗಿಂತ ಒಂದು ವಾರಗಳ ಹಿಂದೆ ಆಕೆಯ ಸಹೋದರ ನಾಪತ್ತೆಯಾಗಿದ್ದಾನೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ರವಿವಾರ ರಾತ್ರಿ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಬೆಂಕಿ ಹಚ್ಚಲಾಗಿದೆ. ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಆಕೆ ಸೋಮವಾರ ಮೃತಪಟ್ಟಿದ್ದಾಳೆ ಎಂದು ನಿಶತ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಚೈನಾ ಸಿಂಗ್ ರಘುವಂಶಿ ತಿಳಿಸಿದ್ದಾರೆ.

ಮರಣ ಸಂದರ್ಭ ಬಾಲಕಿ ರಾಧಾ ಮೋಹನ್ ಅಗ್ನಿಹೋತ್ರಿ ಹಾಗೂ ಅಮಿತ್ ತಿವಾರಿಯ ಹೆಸರು ಹೇಳಿದ್ದಾಳೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಕೂಡ ಹೇಳಿದ್ದಾಳೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಅಗ್ನಿಹೋತ್ರಿ ಹಾಗೂ ತಿವಾರಿ ನಾಪತ್ತೆಯಾಗಿದ್ದ ಸಹೋದರನ ಬಗ್ಗೆ ಬಾಲಕಿಯಲ್ಲಿ ವಿಚಾರಿಸಿದ್ದರು. ಆದರೆ, ಆಕೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಳು. ಇದರಿಂದ ಆಕ್ರೋಶಿತರಾದ ಅಗ್ನಿಹೋತ್ರಿ ಹಾಗೂ ತಿವಾರಿ ಬಾಲಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News