ಅಟಾರ್ನಿ ಜನರಲ್ ರನ್ನು ಭೇಟಿಯಾದ ಸಿಜೆಐ

Update: 2018-01-12 08:35 GMT

ಹೊಸದಿಲ್ಲಿ, ಜ.12: ನಾಲ್ವರು ನ್ಯಾಯಮೂರ್ತಿಗಳು ತಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸುದ್ದಿ ಗೋಷ್ಠಿ  ಏರ್ಪಡಿಸಿದ್ದಾರೆ..

ಇದೇ ವೇಳೆ ಸಿಜೆಐ ಅವರು ಅಟಾರ್ನಿ ಜನರಲ್  ಕೆಕೆ ವೇಣುಗೋಪಾಲ್ ರನ್ನು  ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳಾದ  ಚೆಲಮೆಶ್ವರ್, ರಂಜನ್ ಗೋಗೊಯಿ, ಮದನ್ ಲೋಕುರ್ ಮತ್ತು ಕುರಿಯನ್ ಜೋಸೆಫ್  ಅವರು  ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮುಖ್ಯ ನ್ಯಾಯಮೂರ್ತಿ   ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News