ಕಾಡುಕೋಣ ದಾಳಿ: ಕೂಲಿ ಕಾರ್ಮಿಕ ಮೃತ್ಯು

Update: 2018-01-28 06:16 GMT

ಮೂಡಿಗೆರೆ, ಜ.28: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವನನ್ನುಕಾಡುಕೋಣ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಮೂಡಿಗೆರೆ ತಾಲೂಕಿನ ಬಸನಿ ಗ್ರಾಮದಲ್ಲಿ ಇಂದು ನಡೆದಿದೆ. 

ಮೃತರನ್ನು ಬಳ್ಳಾರಿ ನಿವಾಸಿ ಕುಮಾರ್( 20) ಎಂದು ಗುರುತಿಸಲಾಗಿದೆ. ಇವರು ಬಣಕಲ್ ಸಮೀಪದ ಬಸನಿ ನಾಗರಾಜ್ ಗೌಡ ಎಂಬವರ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾಡುಕೋಣ ದಾಳಿ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News