ಕೈಕೊಟ್ಟ ಬೆಳೆ: ರೈತ ಆತ್ಮಹತ್ಯೆ

Update: 2018-01-29 08:37 GMT

ಚಿಕ್ಕಮಗಳೂರು, ಜ.29: ಬೆಳೆ ಕೈಕೊಟ್ಟಿದ್ದರಿಂದ ಸಾಲ ಮರು ಪಾವತಿಸಲಾಗದೆ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಕಡೂರು ತಾಲೂಕಿನ ಚೊಮ್ಮನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಶಿವಕುಮಾರ್(29) ಎಂದು ಗುರುತಿಸಲಾಗಿದೆ. ಇವರು ವಿವಿಧ ಬ್ಯಾಂಕುಗಳಿಂದ 5 ಲಕ್ಷ ರೂ.ಗೂ ಅಧಿಕ ಸಾಲ ಮಾಡಿ ಈರುಳ್ಳಿ, ಕಡಲೆ ಹಾಗೂ ಅಡಿಕೆ ಕೃಷಿ ಮಾಡಿದ್ದರು. ಆದರೆ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News