ಶ್ರೀರಂಗಪಟ್ಟಣ: ಶಾಸಕ ರಮೇಶ್‍ಬಾಬುಗೆ ಗ್ರಾಮಸ್ಥರ ತರಾಟೆ

Update: 2018-02-05 16:52 GMT

ಶ್ರೀರಂಗಪಟ್ಟಣ, ಫೆ.5: ತಮ್ಮ ಹೆಸರಿನ ಯುವಕರ ಬಳಗವನ್ನು ಉದ್ಘಾಟಿಸಲು ತಾಲೂಕಿನ ದೊಡ್ಡಪಾಳ್ಯ ಗ್ರಾಮಕ್ಕೆ ತೆರಳಿದ್ದ ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡರವರನ್ನು ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲವೆಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಇಲ್ಲ, ರಸ್ತೆಗಳು ಗುಂಡಿಬಿದ್ದಿವೆ. ಬೀದಿದೀಪಗಳು ಕೆಟ್ಟುಹೋಗಿವೆ. ಗ್ರಾಪಂ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಶಾಸಕರು ಮತ್ತು ಗ್ರಾಮದ ಕೆಲವರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಗ್ರಾಮಕ್ಕೆ ಅಗತ್ಯವಿರುವ ಸೌಲಭ್ಯ ಒದಗಿಸುವುದಾಗಿ ಶಾಸಕ ರಮೇಶ್‍ಬಾಬು ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಪುಟ್ಟೇಗೌಡ, ಇತರ ಮುಖಂಡರು ಹಾಜರಿದ್ದರು. ಇದೇ ವೇಳೆ ಗ್ರಾಮದ ಹಿರಿಯರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News