ಗಾಂಧಿ ಕನಸನ್ನು ನನಸಾಗಿಸಿದ ಮೋದಿ ಸರಕಾರ : ಬಿಜೆಪಿ ಸಂಸದ ರಾಕೇಶ್ ಸಿಂಗ್

Update: 2018-02-06 14:19 GMT

ಹೊಸದಿಲ್ಲಿ, ಫೆ.6: ಮಹಾತ್ಮಾ ಗಾಂಧಿಯವರು ಸ್ವಚ್ಛಭಾರತದ ಕನಸು ಕಂಡಿದ್ದರು. ಆರು ದಶಕಗಳ ಅವಧಿಯಲ್ಲಿ ಆಡಳಿತ ನಡೆಸಿದ್ದರೂ ಕಾಂಗ್ರೆಸ್‌ನಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಕೇವಲ ಮೂರೂವರೆ ವರ್ಷಗಳಲ್ಲೇ ನರೇಂದ್ರ ಮೋದಿ ಸರಕಾರ ಈ ಆಕಾಂಕ್ಷೆಯನ್ನು ಈಡೇರಿಸಿದೆ ಎಂದು ಬಿಜೆಪಿ ಸಂಸದ ರಾಕೇಶ್ ಸಿಂಗ್ ಬಣ್ಣಿಸಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ಗೊತ್ತುವಳಿಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಂಗ್, ಸರಕಾರ ವಿವಿಧ ಕ್ಷೇತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸ್ವಚ್ಛಭಾರತ ಅಭಿಯಾನದಲ್ಲಿ ಅಪಾರ ಸಾಧನೆ ಮಾಡಿದೆ ಎಂದರು. ಒಟ್ಟು 5.5 ಕೋಟಿ ಶೌಚಾಲಯಗಳನ್ನು ಕಳೆದ 3.5 ವರ್ಷಗಳಲ್ಲಿ ನಿರ್ಮಿಸಲಾಗಿದೆ ಎಂದ ಸಿಂಗ್, ನಮಗೆ ಎಲ್ಲಾ ಧರ್ಮದವರು, ಎಲ್ಲಾ ವರ್ಗದವರೂ ಸರಿಸಮಾನರು. ಅಭಿವೃದ್ಧಿ ಕಾರ್ಯದಲ್ಲಿ ಪ್ರತಿಪಕ್ಷಗಳನ್ನೂ ಜೊತೆಯಲ್ಲೇ ಪರಿಗಣಿಸುವ ಸರಕಾರ ನಮ್ಮದು ಎಂದರು.

ಈ ಹಿಂದೆ(ಯುಪಿಎ ಸರಕಾರದ ಅವಧಿಯಲ್ಲಿ) ಭ್ರಷ್ಟಾಚಾರ ಹಾಗೂ ಹಗರಣದ ಬಗ್ಗೆಯೇ ಮಾತುಕತೆ ಸಾಗುತ್ತಿತ್ತು. ಆದರೆ ಈಗ ಇಂತಹ ಮಾತುಗಳು ಕೇಳಿಬರುತ್ತಿಲ್ಲ ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News