ಮಂಚದ ಕೆಳಗೆ ಬಾಂಬ್ ಇಟ್ಟು ಸ್ಫೋಟಿಸಿ ಕಾಂಗ್ರೆಸ್ ಮುಖಂಡನ ಹತ್ಯೆ
Update: 2018-02-13 04:58 GMT
ತೆಲಂಗಾಣ, ಫೆ.13:ರಾತ್ರಿ ಮನೆಯ ಹೊರಗೆ ಮಂಚದಲ್ಲಿ ಮಲಗಿದ್ದಾಗ ಮಂಚದ ಕೆಳಗೆ ಬಾಂಬು ಇಟ್ಟು ಸ್ಫೋಟಿಸಿ ಕಾಂಗ್ರೆಸ್ ಮುಖಂಡನೊಬ್ಬನನ್ನು ಹತ್ಯೆಗೈದ ಭೀಕರ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಪೇಟೆ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ಕಾಂಗ್ರೆಸ್ ಮುಖಂಡ ಧರ್ಮನಾಯಕ ಭೀಕರವಾಗಿ ಹತ್ಯೆಗೈಯ್ಯಲ್ಪಟ್ಟಿದ್ದಾರೆ. ಬಾಂಬು ಸ್ಪೋಟದ ತೀವ್ರತೆಗೆ ಧರ್ಮನಾಯಕರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. ಮುನ್ನಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಧರ್ಮನಾಯಕ ಸರಪಂಚ್ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದರು. ಹತ್ಯೆಗೆ ಹಳೆ ದ್ವೇಷಯೇ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.