ಕಮಲ್ ಹಾಸನ್ ಪಕ್ಷಕ್ಕೆ ಬುಧವಾರ ಚಾಲನೆ
Update: 2018-02-20 15:54 GMT
ಹೊಸದಿಲ್ಲಿ, ಫೆ. 20: ತಮಿಳುನಾಡಿನ ಮಧುರೈಯಲ್ಲಿ ರಾಜಕೀಯ ಪಕ್ಷ ಹಾಗೂ ಅದರ ‘ಮಾಗದರ್ಶಕ ತತ್ವ’ಗಳನ್ನು ಆರಂಭಿಸುವುದರೊಂದಿಗೆ ಹಿರಿಯ ನಟ ಕಮಲ್ ಹಾಸನ್ ಬುಧವಾರ ರಾಜ್ಯ ವ್ಯಾಪಿ ಪ್ರವಾಸ ಆರಂಭಿಸಲಿದ್ದಾರೆ.
ಪ್ರವಾಸದ ಮೊದಲ ಹಂತವಾಗಿ ತನ್ನ ತಾಯ್ನಾಡಾದ ರಾಮನಾಥಪುರಂ ಹಾಗೂ ಮಧುರೈ, ದಿಂಡಿಗಲ್ ಹಾಗೂ ಶಿವಗಂಗೈ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಕಮಲ್ ಹಾಸನ್ ಅವರ ಮಧುರೈ ರ್ಯಾಲಿಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಈ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ನೂತನ ಪಕ್ಷಕ್ಕೆ ಶುಭ ಹಾರೈಸಿ ವೀಡಿಯೊ ಸಂದೇಶ ಕಳುಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕೂಡ ಆಹ್ವಾನಿಸಲಾಗಿದೆ. ಆದರೆ, ಅವರ ಪಾಲ್ಗೊಳ್ಳುವಿಕೆ ಇದುವರೆಗೆ ದೃಢಪಟ್ಟಿಲ್ಲ.