ಬೇಕರಿ ಕೇಕ್ ಸೇವನೆ : 5 ಮಕ್ಕಳು ಅಸ್ವಸ್ಥ

Update: 2018-03-01 17:44 GMT

ಮಂಡ್ಯ, ಮಾ.1: ಮದ್ದೂರಿನ ಬೇಕರಿಯೊಂದರಲ್ಲಿನ ಕೇಕ್ ಸೇವಿಸಿ 5 ಮಕ್ಕಳು ಅಸ್ವಸ್ಥಗೊಂಡಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮದ್ದೂರು ತಾಲೂಕು ಮಾದರಹಳ್ಳಿ ದೇವೇಗೌಡರ ಪುತ್ರ ಧನುಷ್(6), ಹುಲಿಗೆರೆಪುರ ಕೃಷ್ಣರ ಪುತ್ರ ದರ್ಶನ್(9), ಅಜ್ಜಹಳ್ಳಿ ಕೆಂಪರಾಜು ಅವರ  ಮಕ್ಕಳಾದ ಅನುಷಾ(5), ನಿಶ್ಚಿತ(7) ಹಾಗೂ ಕೊಳ್ಳೇಗಾಲದ ವೆಂಕಟೇಶ್ ಪುತ್ರಿ ಶ್ರೇಯ(3) ಅಸ್ವಸ್ಥಗೊಂಡವರು.

ಆಲೂಜನಹಳ್ಳಿಯಲ್ಲಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ದೊಳ್ಳೇಗೌಡ ತನ್ನ ಮೊಮ್ಮಕ್ಕಳಿಗೆ ಮದ್ದೂರಿನ ಬೇಕರಿಯೊಂದರಲ್ಲಿ ಕೇಕ್ ಕೊಡಿಸಿದ್ದರು. ಅಜ್ಜಹಳ್ಳಿ ಕೆಂಪರಾಜು ಅವರೂ ಪ್ರತ್ಯೇಕವಾಗಿ ತನ್ನ ಮಕ್ಕಳಿಗೆ ಕೇಕ್ ಕೊಡಿಸಿದ್ದರು.

ಕೇಕ್ ತಿಂದ ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ, ಬೇದಿ ಮಾಡಿಕೊಂಡಿದ್ದಾರೆ. ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News