ಮಅದನಿ ಕೇರಳಕ್ಕೆ ಬರಲು ಅವಕಾಶ ನೀಡಿ: ಸಿದ್ದರಾಮಯ್ಯಗೆ ಕೇರಳ ಸಿಎಂ ಪತ್ರ

Update: 2018-03-06 11:16 GMT

ತಿರುವನಂತಪುರಂ,ಮಾ. 6: ಬೆಂಗಳೂರಿನಲ್ಲಿ ಚಿಕಿತ್ಸೆಯಲ್ಲಿರುವ ಪಿಡಿಪಿ ಅಧ್ಯಕ್ಷ ಅಬ್ದುನ್ನಾಸಿರ್ ಮಅದನಿಯವರ ಆರೋಗ್ಯ ಹದಗೆಟ್ಟಿದ್ದು, ಹೆಚ್ಚಿನ  ಚಿಕಿತ್ಸೆಗಾಗಿ ಅವರನ್ನು ಕೇರಳಕ್ಕೆ ಕರೆತರಲು ಅವಕಾಶ ಮಾಡಿಕೊಡಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ  ಪತ್ರ ಬರೆದಿದ್ದಾರೆ. ಮಅದನಿಯವರ ಚಿಕಿತ್ಸೆಗಾಗಿ ಕೇರಳಕ್ಕೆ ವರ್ಗಾಯಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಯಾವ ಅಪರಾಧವೂ ಮಾಡದೆ 12 ವರ್ಷಗಳಿಂದ ಮಅದನಿ ಜೈಲಿನಲ್ಲಿದ್ದಾರೆ. ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಬೆಂಗಳೂರಿನ ಎಂಎಸ್‍ರಾಮಯ್ಯ ಮೆಮೊರಿಯಲ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿನಂಪ್ರತಿ ಅವರ ಆರೋಗ್ಯ ಸ್ಥಿತಿ ಕೆಡುತ್ತಿರುವುದರಿಂದ ಕೇರಳಕ್ಕೆ ಅವರನ್ನು ಕರೆತರಲು ಅನುಕೂಲವಾಗುವ ನಿಲುವು ತಾವು ಕೈಗೊಳ್ಳಬೇಕಾಗಿದೆ. ಕೇರಳದ ಧಾರ್ಮಿಕ ನಾಯಕರು, ವಿವಿಧ ಸಂಘಟನೆಗಳು ಈ ವಿಷಯವನ್ನು ಸೂಚಿಸಿ ತನ್ನನ್ನು ಭೇಟಿಯಾಗಿವೆ. ಮಅದನಿ ಚಿಕಿತ್ಸೆಗಾಗಿ ಕೇರಳಕ್ಕೆ ಬರಲು ಅವಕಾಶ ಮಾಡಿ ಕೊಡಬೇಕೆಂದು  ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದು ಅದನ್ನು ಪ್ರಾಸಿಕ್ಯೂಶನ್ ಬಲವಾಗಿ ವಿರೋಧಿಸಿತ್ತು. ಈಗ ಅವರ ಆರೋಗ್ಯ ಕೆಟ್ಟಿರುವ  ಪರಿಸ್ಥಿತಿಯಲ್ಲಿ ಮಅದನಿಗೆ ಅನುಕೂಲಕರ ನಿಲುವು ಕೈಗೊಳ್ಳುವಂತೆ ಸಿದ್ದರಾಮಯ್ಯರಿಗೆ ಬರೆದ ಪತ್ರದಲ್ಲಿ  ಪಿಣರಾಯಿವಿಜಯನ್  ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News