ಚಾಮರಾಜನಗರ: ಬಸ್-ಆಟೋ ಢಿಕ್ಕಿ; ಚಾಲಕ ಮೃತ್ಯು
Update: 2018-03-13 17:24 GMT
ಚಾಮರಾಜನಗರ,ಮಾ.13: ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಮುಖಾಮುಖಿ ಆಟೋ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದ ಸಮೀಪದ ನಡೆದಿದೆ
ಚಾಮರಾಜನಗರದಿಂದ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು, ಆಟೋ ಅನ್ನು ಹಿಂದಿಕ್ಕುವಾಗ ಉಡಿಗಾಲ ಗ್ರಾಮದ ಬಳಿ ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಚಾಲಕ ಮೃತಪಟ್ಟಿದ್ದಾರೆ.
ಅಟೋದಲ್ಲಿದ್ದ ನಾಗರಾಜುರವರಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.