ಎಸ್ಪಿಗೆ ಸೇರ್ಪಡೆಯಾದ ಉತ್ತರ ಪ್ರದೇಶ ಸಚಿವರ ಅಳಿಯ

Update: 2018-03-17 14:02 GMT

ಲಕ್ನೋ, ಮಾ.17: ಉತ್ತರ ಪ್ರದೇಶ ಸರಕಾರದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಅಳಿಯ ನವಾಲ್ ಕಿಶೋರ್ ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಉಪಚುನಾವಣೆಯ ಸೋಲಿನ ನಂತರ ಆದಿತ್ಯನಾಥ್ ಸರಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಎಸ್ಪಿ ನಾಯಕ ಅಖಿಲೇಶ್ ಯಾದವ್ ಹಾಗು ಅಝಂ ಖಾನ್ ಉಪಸ್ಥಿತಿಯಲ್ಲಿ ಕಿಶೋರ್ ಪಕ್ಷಕ್ಕೆ ಸೇರ್ಪಡೆಯಾದರು.

ಬಿಎಸ್ ಪಿಯಲ್ಲಿ ಒಬಿಸಿ ನಾಯಕರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ2016ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದೀಗ ಅವರು ಉತ್ತರ ಪ್ರದೇಶ ಸರಕಾರದ ಕಾರ್ಮಿಕ, ಸೇವಾ ಯೋಜನೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಗೋರಖ್ ಪುರ ಹಾಗು ಫುಲ್ಪುರ ಲೋಕಸಭಾ ಕ್ಷೇತ್ರಗಳಲ್ಲಿನ ಸೋಲಿನಿಂದ ಬಿಜೆಪಿ ತೀವ್ರ ಮುಖಭಂಗಕ್ಕೊಳಗಾಗಿತ್ತು. ಈ ಎರಡೂ ಕ್ಷೇತ್ರಗಳಲ್ಲಿ ಬಿಎಸ್ಪಿ ಬೆಂಬಲದೊಂದಿಗೆ ಎಸ್ಪಿ ಅಭ್ಯರ್ಥಿಗಳು ಜಯ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News