ಮೋದಿ ಸರಕಾರ ರೈತ ಹಿತೈಷಿಯಲ್ಲ, ಉದ್ಯಮಿಗಳ ಹಿತೈಷಿ: ಅಣ್ಣಾ ಹಝಾರೆ

Update: 2018-03-18 16:41 GMT

ಖಗಡಿಯಾ, ಮಾ. 18: ಸಾಮಾಜಿಕ ಕಾರ್ಯಕರ್ತ ಅಣ್ಣಾಹಝಾರೆ ಬಿಹಾರದ ಖಗಾಡಿಯದಲ್ಲಿ ನಡೆದ ರೈತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶನಿವಾರ ಪಾಟ್ನಕ್ಕೆ ಬಂದಿದ್ದರು. ಇದೇವೇಳೆ ಅವರು ಕೇಂದ್ರದ ಮೋದಿ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

"ಕೇಂದ್ರ ಸರಕಾರ ಉದ್ಯಮಿಗಳ ಹಿತೈಷಿ, ರೈತ ಹಿತೈಷಿಯಲ್ಲ. ದೇಶದಲ್ಲಿ ಸಾಲದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ ಯಾವುದೇ ಉದ್ಯಮಿಯ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿಲ್ಲ" ಎಂದು ಅಣ್ಣಾ ಹಝಾರೆ ಹೇಳಿದರು.

ಸಮಾಜದ ಹಿತದೃಷ್ಟಿಯಿಂದ ನರೇಂದ್ರ ಮೋದಿಗೆ 32 ಪತ್ರಗಳನ್ನು ಬರೆದೆ. ಅವರು ವಿದೇಶ ಪ್ರವಾಸದಲ್ಲಿಯೇ ವ್ಯಸ್ತವಾಗಿ ಈವರೆಗೆ ತನ್ನ ಒಂದು ಪತ್ರಕ್ಕೂ ಉತ್ತರಿಸಿಲ್ಲ. ಮಾರ್ಚ್23ಕ್ಕೆ ದಿಲ್ಲಿಯಲ್ಲಿ ರೈತ ಸಮ್ಮೇಳನ ಹಮ್ಮಿಕೊಂಡಿರುವುದಾಗಿ ತಿಳಿಸಿದ ಅವರು, ಎಲ್ಲ ರೈತರು ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News