ಮಂಡ್ಯ: ಅನಾರೋಗ್ಯದಿಂದ ವಿಚಾರಣಾಧೀನ ಕೈದಿ ಸಾವು

Update: 2018-03-25 17:05 GMT

ಮಂಡ್ಯ, ಮಾ.25: ನಗರದ ಜಿಲ್ಲಾ ಕಾರಾಗೃಹದಲ್ಲಿ ರವಿವಾರ ಮುಂಜಾನೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ನಿವಾಸಿ ದೇವಯ್ಯ ಎಂಬುವರ ಪುತ್ರ ಕಿರಣ್(25) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಕೆಆರ್‍ಎಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಕಿರಣ್, 2016 ಆಗಸ್ಟ್ 27ರಿಂದ ಜಿಲ್ಲಾ ಕಾರಾಗೃಹದಲ್ಲಿದ್ದನು. ಈತನೊಂದಿಗೆ ಅದೇ ಪ್ರಕರಣದಲ್ಲಿ ಇನ್ನೂ ಐದು ಮಂದಿ ಬಂಧಿತರಾಗಿದ್ದು, ಅವರೆಲ್ಲರೂ ಸಹ ಜೈಲಿನಲ್ಲೇ ಇದ್ದಾರೆ.

ಶನಿವಾರ ತಡರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಬೇಧಿಯಿಂದ ತೀವ್ರ ಅಸ್ವಸ್ಥಗೊಂಡ ಕಿರಣ್‍ನನ್ನು ಜಿಲ್ಲಾಸ್ಪತ್ರೆಗೆ ತರಲಯಿತು. ಆದರೆ, ಮಾರ್ಗಮಧ್ಯೆಯ ಆತ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದರೆನ್ನಲಾಗಿದೆ.

ಶವ ಪರೀಕ್ಷೆ ನಂತರ ಪೋಷಕರಿಗೆ ಶವವನ್ನು ಒಪ್ಪಿಸಲಾಯಿತು. ಮೈಸೂರಿನ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಆನಂದರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News