ತಿರುವನಂತಪುರಂ: ರೇಡಿಯೊ ಜಾಕಿಯ ಕಗ್ಗೊಲೆ

Update: 2018-03-27 10:34 GMT

ತಿರುವನಂತಪುರಂ,ಮಾ. 27: ಇಲ್ಲಿಗೆ ಸಮೀಪದ ಆಟ್ಟಿಂಗಲ್ ಮಡವೂರಿನಲ್ಲಿ  ರೇಡಿಯೊ ಜಾಕಿಯೊಬ್ಬರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಕಡಿದು ಕೊಲೆಮಾಡಿದೆ.  ರೆಡ್ ಎಫ್ ಎಂನ ರೇಡಿಯೊ ಜಾಕಿ ರಾಜೇಶ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮುಂಜಾನೆ ಎರಡು ಗಂಟೆ ಹೊತ್ತಿಗೆ ನಾಲ್ವರ ತಂಡ ರಾಜೇಶ್ ಮೇಲೆ ಮಚ್ಚಿನಿಂದ ದಾಳಿ ನಡೆಸಿದೆ. ರಾಜೇಶ್ ಮೃತಪಟ್ಟರೆ, ಅವರ ಜೊತೆಯಲ್ಲಿದ್ದ  ಕುಟ್ಟನ್ ಎಂಬವರು ಗಾಯಗೊಂಡಿದ್ದಾರೆ.  ಆಟ್ಟಿಂಗಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News