ಅಣ್ಣಾ ಹಝಾರೆ ನಿರಶನ ಅಂತ್ಯ

Update: 2018-03-29 15:55 GMT

ಹೊಸದಿಲ್ಲಿ, ಮಾ.29: ಕೇಂದ್ರದಲ್ಲಿ ಲೋಕಪಾಲರನ್ನು ಹಾಗು ರಾಜ್ಯಗಳಲ್ಲಿ ಲೋಕಾಯುಕ್ತರನ್ನು ಶೀಘ್ರದಲ್ಲೇ ನೇಮಕ ಮಾಡಲಾಗುವುದು ಎಂದು ಸರಕಾರದಿಂದ ಭರವಸೆ ಲಭಿಸಿದ ನಂತರ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆಯವರ ನಿರಶನ ಅಂತ್ಯಗೊಂಡಿದೆ.

ಭರವಸೆಯನ್ನು ಈಡೇರಿಸಲು ಆಗಸ್ಟ್ ವರೆಗೆ ಸಮಯ ನೀಡಿರುವುದಾಗಿ ಹೇಳಿರುವ ಹಝಾರೆ, ಅಲ್ಲಿಯವರೆಗೆ ಭರವಸೆ ಈಡೇರದಿದ್ದಲ್ಲಿ ಸೆಪ್ಟಂಬರ್ ನಲ್ಲಿ ಮತ್ತೊಮ್ಮೆ ಪ್ರತಿಭಟನೆ ಆರಂಭಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News