ಮಂಡ್ಯ: ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ; ತೀವ್ರ ಅಸ್ವಸ್ಥ
Update: 2018-04-10 18:41 GMT
ಮಂಡ್ಯ, ಎ.10: ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಶ್ರೀನಿವಾಸಪುರ ಗೇಟ್ನಲ್ಲಿ ಮಂಗಳವಾರ ಸಂಜೆ ನಡೆದಿದೆ
ರವಿಕುಮಾರ್(55), ವಿಜಿಯಮ್ಮ(45) ಹಾಗೂ ರತನ್ಗೌಡ(35) ಎಂಬುವವರು ವಿಷ ಸೇವಿಸಿ ತೀವ್ರವಾಗಿ ಅಸ್ವಸ್ಥರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ವಿಷ ಸೇವನೆಗೂ ಮುನ್ನ ಸೆಲ್ಫೀ ವಿಡಿಯೋ ಮಾಡಿರುವ ರತನ್ ಎಂಬುವವರು, ನನ್ನನ್ನು ನನ್ನ ಪತ್ನಿ ಹಾಗೂ ಅವರ ಮನೆಯವರಿಂದ ರಕ್ಷಿಸಿ ಮತ್ತು ಮಂಡ್ಯದಲ್ಲಿ ಮಾಜಿ ಶಾಸಕ ಹಾಗೂ ಹಾಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂ.ಶ್ರೀನಿವಾಸ್ ಅವರ ಪುಂಡಾಟವನ್ನು ಮಟ್ಟಹಾಕಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ, ನಿಮ್ಮ ಭಾಗ್ಯದ ಜೊತೆಗೆ ಜೆಡಿಎಸ್ ಮುಕ್ತ ಭಾಗ್ಯ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.