ಎರಡು ದಿನಗಳ ಕಾಲಾವಕಾಶಕ್ಕೆ ಸ್ಪೀಕರ್ ಗೆ ಸಿಎಂ ಮನವಿ

Update: 2019-07-22 06:23 GMT

ಬೆಂಗಳೂರು, ಜು. 22: ವಿಶ್ವಾಸ ಮತಯಾಚನೆಗೆ ಇನ್ನು ಎರಡು ದಿನಗಳ ಕಾಲಾವಕಾಶ ಕೊಡಿ ಎಂದು ಮುಖ್ಯ ಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಅವರು ಸ್ಪೀಕರ್ ರಮೇಶ್ ಕುಮಾರ್  ಅವರಿಗೆ ಮನವಿ ಮಾಡಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಅವರನ್ನು  ಭೇಟಿಯಾದ ಸಿಎಂ ಕುಮಾರಸ್ವಾಮಿ, ಸಚಿವರಾದ ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ, ಹೆಚ್ ಡಿ ರೇವಣ್ಣ ಅವರು 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.  ಇದೇ ವೇಳೆ ಸಿಎಂ ಅವರು ವಿಶ್ವಾಸಮತ ಯಾಚನೆಗೆ ಎರಡು ದಿನಗಳ ಕಾಲಾವಕಾಶ ಕೇಳಿದರು. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂಗೆ ಯಾವುದೇ ಭರವಸೆ ನೀಡಿಲ್ಲ.

ಇಂದೇ ವಿಶ್ವಾಸಮತ ಪ್ರಕ್ರಿಯೆಯನ್ನು ಮುಗಿಸುವಂತೆ ಬಿಜೆಪಿ ಸ್ಪೀಕರ್ ಗೆ ಮನವಿ ಮಾಡಿದ್ದು, ಇದಕ್ಕೂ ಅವರು  ಯಾವುದೇ ಉತ್ತರ ನೀಡಿಲ್ಲ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News