ಸಿದ್ಧಾರ್ಥ ಪತ್ರದ ಬಗ್ಗೆ ಕೆಫೆ ಕಾಫಿ ಡೇ ನಿರ್ದೇಶಕರ ಅನುಮಾನ

Update: 2019-07-31 09:21 GMT

ಬೆಂಗಳೂರು, ಜು.31: ಕೆಫೆ ಕಾಫಿ ಡೇ  ಸ್ಥಾಪಕಾಧ್ಯಕ್ಷ  ವಿ.ಜಿ. ಸಿದ್ಧಾರ್ಥ ಅವರು ಸಾಯುವ ಮೂರು ದಿನಗಳ ಮೊದಲು ಬರೆದಿರುವ ಪತ್ರದ ಬಗ್ಗೆ ಕೆಫೆ ಕಾಫಿ ಡೇ   ನಿರ್ದೇಶಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಂದು ನಡೆದ ಕೆಫೆ ಕಾಫಿ ಡೇ   ಆಡಳಿತ ಸಮಿತಿಯ ಸಭೆಯಲ್ಲಿ ಸಿದ್ಧಾರ್ಥ ಅವರು ಬರೆದಿದ್ದರೆನ್ನಲಾದ  ಪತ್ರದ ಬಗ್ಗೆ ನಿರ್ದೇಶಕರು ಅನುಮಾನ ವ್ಯಕ್ತಪಡಿಸಿದರು.

ಈ ಪತ್ರದ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ ಸಭೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದೆ.

ಕಂಪನಿ  ಮತ್ತು ನೌಕರರ ಹಿತ ಕಾಯುವಂತೆ  ಸಿದ್ಧಾರ್ಥ ಪತ್ನಿ ಮಾಳವಿಕಾ ಸಿದ್ಧಾರ್ಥ ನೀಡಿದ ಸೂಚನೆಯಂತೆ ಇಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಹಂಗಾಮಿ ಅಧ್ಯಕ್ಷರು ಮತ್ತು ಸಿಇಒ ನೇಮಕವಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News