ಹೋಮಿಯೋಪಥಿ ನಿರ್ದೇಶಕ ಮಂಡಳಿ ಸದಸ್ಯರಾಗಿ ರುದ್ರೇಶ್ ನೇಮಕ
Update: 2019-08-03 16:31 GMT
ಬೆಂಗಳೂರು, ಆ.3: ಡಾ.ಬಿ.ಟಿ.ರುದ್ರೇಶ್ರನ್ನು ಸ್ವಾಯತ್ತ ಸಂಸ್ಥೆಯಾಗಿರುವ ಕೇಂದ್ರೀಯ ಹೋಮಿಯೋಪಥಿ ಮಂಡಳಿಯ ನಿರ್ದೇಶಕ ಮಂಡಳಿ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.
ಹೋಮಿಯೋಪಥಿ ಕೇತ್ರದಲ್ಲಿ ರುದ್ರೇಶ್ರ ಸೇವೆ ಪರಿಗಣಿಸಿ ಪ್ರಧಾನಿ ಕಚೇರಿ ಈ ನೇಮಕ ಮಾಡಲಾಗಿದೆ. ರುದ್ರೇಶ್ ಕರ್ನಾಟಕ ಹೋಮಿಯೋಪಥಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಜ್ಞಾನ ಆಯೋಗದ ಸದಸ್ಯರಾಗಿ, ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.