ಕೆಪಿಜೆಪಿ ಕಾಂಗ್ರೆಸ್ ಜೊತೆ ವಿಲೀನ ಆಗಿಲ್ಲ: ಅನರ್ಹ ಶಾಸಕ ಆರ್.ಶಂಕರ್

Update: 2019-08-05 16:29 GMT

ಬೆಂಗಳೂರು, ಆ.5: ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ(ಕೆಪಿಜೆಪಿ) ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಿಲ್ಲ ಎಂದು ಅನರ್ಹ ಶಾಸಕ ಆರ್. ಶಂಕರ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು, ನನಗೆ ಕ್ರಮ ಬದ್ಧವಾಗಿ ದಾಖಲೆ ಮತ್ತು ಮನವಿ ಪತ್ರ ಸಲ್ಲಿಕೆ ಮಾಡಿ ಎಂದಿದ್ದರು. ಆದರೆ, ಸೂಕ್ತ ರೀತಿಯ ದಾಖಲೆ, ಪ್ರಮಾಣ ಪತ್ರ ಸಲ್ಲಿಕೆ ಮಾಡದ ಕಾರಣಕ್ಕೆ ನನ್ನನ್ನು ಅನರ್ಹ ಮಾಡಲಾಗಿದೆ. ಅಲ್ಲದೆ, ಇದನ್ನು ಸುಪ್ರೀಂಕೋರ್ಟ್ ಒಪ್ಪುವುದಿಲ್ಲ. ಅಷ್ಟೇ ಅಲ್ಲದೆ, ನನ್ನ ಕ್ಷೇತ್ರದಲ್ಲಿ ಉಪಚುನಾವಣೆ ಆಗಲ್ಲ ಎಂದು ತಿಳಿಸಿದರು.

ಮೈತ್ರಿ ಸರಕಾರದ ಜೊತೆ ಇರಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ, ಸರಕಾರದಲ್ಲಿ ಆದ ಕೆಲ ಘಟನೆಗಳಿಂದ ಬೆಂಬಲ ವಾಪಸ್ಸು ಪಡೆಯುವ ನಿರ್ಧಾರ ಮಾಡಬೇಕಾಯಿತು ಎಂದು ಶಂಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News