ಪ್ರವಾಹ: ಗುಳೆ ಹೋಗುವ ಮಕ್ಕಳಿಗೆ ಯಾವುದೇ ಶಾಲಾ ಪ್ರವೇಶಕ್ಕೆ ಅವಕಾಶ

Update: 2019-08-11 18:08 GMT

ಬೆಂಗಳೂರು, ಆ.11: ಪ್ರವಾಹ ಪೀಡಿತ ಪ್ರದೇಶಗಳಿಂದ ಗುಳೆ ಹೋಗುವ ಮಕ್ಕಳು ರಾಜ್ಯದ ಯಾವುದೇ ಕಡೆಗಳಿಗೆ ತೆರಳಿದರೂ, ದಾಖಲೆಗಳನ್ನು ನೋಡದೆ ಅವರನ್ನು ಯಾವುದೇ ಶಾಲೆಗೆ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದ್ದು, ಮಕ್ಕಳ ಶಿಕ್ಷಣ ಮುಂದುವರಿಸುವುದಕ್ಕೆ ಯಾವುದೇ ಅಡ್ಡಿ ಆಗಬಾರದು ಎಂದು ತಿಳಿಸಲಾಗಿದೆ. ಪ್ರವಾಹದಲ್ಲಿ ಆಧಾರ್, ಜನನ ಪ್ರಮಾಣ ಪತ್ರದಂತಹ ಪ್ರಮುಖ ದಾಖಲೆಗಳು ಕಳೆದು ಹೋದ ಅದೆಷ್ಟೋ ನಿದರ್ಶನಗಳಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸರಕಾರದ ಈ ನಿರ್ಧಾರ ವನ್ನು ‘ಕಾಮ್ಸ್’ ಸಂಘಟನೆ ಸ್ವಾಗತಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News