ಆರೆ ಕಾಲನಿಯಲ್ಲಿ ಮರಗಳಿಗೆ ಕೊಡಲಿ: ಕೇಂದ್ರ ಪರಿಸರ ಸಚಿವರಿಂದ ಸಮರ್ಥನೆ
Update: 2019-10-05 15:48 GMT
ಹೊಸದಿಲ್ಲಿ, ಅ.5: ಮುಂಬೈಯ ಆರೆ ಕಾಲೊನಿಯಲ್ಲಿ ಮೆಟ್ರೊ ರೈಲು ಕಾಮಗಾರಿಗೆ ಮರಗಳನ್ನು ಕಡಿಯುತ್ತಿರುವುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸಮರ್ಥಿಸಿದ್ದಾರೆ.
ಆರೆ ಪ್ರದೇಶವು ಅರಣ್ಯಪ್ರದೇಶವಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ ಈ ಹಿಂದೆ ದಿಲ್ಲಿ ಮೆಟ್ರೋ ರೈಲು ಕಾಮಗಾರಿ ಸಂದರ್ಭವೂ ಸುಮಾರು 25 ಮರಗಳನ್ನು ಕಡಿಯಲಾಗಿದೆ. ಅಭಿವೃದ್ಧಿ ಕಾರ್ಯ ಮತ್ತು ಪರಿಸರ ಸಂರಕ್ಷಣೆ ಕಾರ್ಯ ಜೊತೆಯಲ್ಲೇ ಸಾಗಬಹುದು ಎಂದು ಜಾವಡೇಕರ್ ಹೇಳಿದ್ದಾರೆ.
ದಿಲ್ಲಿ ಮೆಟ್ರೋ ರೈಲು ಕಾಮಗಾರಿ ಸಂದರ್ಭ ಕಡಿಯಲಾದ ಪ್ರತೀ ಒಂದು ಮರದ ಬದಲು ಐದು ಗಿಡ ನೆಡಲಾಗಿದೆ. ಇದು ಅಭಿವೃದ್ಧಿಯ ಮಂತ್ರವಾಗಿದೆ ಮತ್ತು ಪರಿಸರ ಸಂರಕ್ಷಣೆಯ ಕ್ರಮವಾಗಿದೆ. ಎರಡೂ ಜೊತೆಯಲ್ಲೇ ಸಾಗಬೇಕು ಎಂದವರು ಹೇಳಿದರು.